ಶನಿವಾರ, ಮೇ 23, 2020

ಕನ್ನಡಕ್ಕಾಗಿ ಬರೆಯೋಣ.......

ಸಾಮಾಜಿಕ ಜಾಲತಾಣದಲ್ಲಿ ಅವಾಗವಾಗ ಏನೇನೋ ಚಾಲೆಂಜುಗಳು ನಡೀತಾ ಇರೋದನ್ನ ನೋಡಿದೀವಿ........ಅದ್ರಲ್ಲೂ, ಈ ಲೊಕ್ಡೌನ್ ಸಮಯದಲ್ಲಂತೂ,  ಚ್ಯಾಲೆಂಜುಗಳ ಸುರಿಮಳೆ ಅಯೀತು. ಇಂತಹ ಉಭಯ ಸಂಕಟದ ಮಧ್ಯೆ ನಮ್ಮ ಹೆಂಗಳೆಯರು ಮಾಡಿದ, ಚಂದ ಚಂದದ ಸೀರೆಗಳನ್ನುಟ್ಟ "ಸಾರಿ ಚಾಲೆಂಜ್", ತಮ್ಮ ಪರಿವಾರದೊಂದಿದೆ ವಿವಿಧ ಸಂಧರ್ಭದಲ್ಲಿ ಕ್ಲಿಕ್ಕಿಸಿದ "ಫ್ಯಾಮಿಲಿ ಫೋಟೋ ಚಾಲೆಂಜ್",  ಫೇಸ್ಬುಕ್ ಸ್ನೇಹಿತರೊಂದಿಗೆ ತಾವು ಭೆಟ್ಟಿಯಾದ ಸ್ಥಳ ಸಂದರ್ಭ ನೆನಪು ಹಂಚಿಕೊಳ್ಳುವ ಚಾಲೆಂಜ್...... ಹೀಗೆ ಅನೇಕ ಸವಾಲುಗಳನ್ನು ಸ್ವೀಕರಿಸುವ ಚಾಲೆಂಜುಗಳು ಕಂಡು ಬಂದಿದ್ದು ವಿಶೇಷ ........ ಮುಂದಿನದು ಗೊತ್ತಿಲ್ಲ, ಇಂದು ಮಾತ್ರ ಇಷ್ಟವಾದ್ದನ್ನ ಮಾಡಿ ಖುಷಿಯಾಗಿರೋಣ ಅನ್ನುವ ಮನೋಸ್ಥಿತಿ....  ಈ ಲೊಕ್ಡೌನ್ ಸಮಯದಲ್ಲಿ ವಾಸ್ತವಿಕವಾಗಿ ದೂರ ಇದ್ದರು,  ಈ ತರಹದ ಚಾಲೆಂಜುಗಳ ಮೂಲಕ ಸಾಮಾಜಿಕವಾಗಿ ಹತ್ತಿರವಾಗಿ, ಮನೋಸ್ಥೈರ್ಯ ಬೆಳೆಸಿಕೊಳ್ಳಲು ಸಹಾಯವಾದ ಒಂದು ಪ್ರಸಂಗ...... 

ಆದರೆ ಇದುವರೆಗೆ ಕಂಡಂತಹ ಅನೇಕ ಚಾಲೆಂಜ್ಗಳಲ್ಲಿ ನನಗೆ ಅತೀ ಇಷ್ಟವಾಗಿದ್ದು, ಒಂತರಾ ಭಿನ್ನವಾದ ಕನ್ನಡಕ್ಕಾಗಿ_ಬರೆಯೋಣ ಎಂಬ ಚಾಲೆಂಜು....... ಈ ಚಾಲೆಂಜು ಬಹಳ ಸಿಂಪಲ್, ನಿಮ್ಮ ನೆಚ್ಚಿನ ಕನ್ನಡದ ಎರಡು ಸಾಲುಗಳನ್ನು ನಿಮ್ಮ ಹಸ್ತಾಕ್ಷರಗಳಲ್ಲಿ ಒಂದು ಕಾಗದದ ಮೇಲೆ ಬರೆದು ಫೋಟೋ ತೆಗೆದು ಅದನ್ನ ನೀಮ್ಮ ಫೇಸ್ಬುಕ್ ಗೋಡೆಯಮೇಲೆ ಹಂಚಿಕೊಳ್ಳೋದು. ಆಮೇಲೆ ನಿಮ್ಮ ಸ್ನೇಹಿತ ಬಳಗಕ್ಕೆ ಈ ಸವಾಲನ್ನು ನೀಡಿ, ಅವರನ್ನು ಟ್ಯಾಗ್ ಮಾಡೋದು...... ಆ ಎರಡು ಸಾಲುಗಳು ನಿಮ್ಮ ಸ್ವಂತದ್ದಾಗಿರಬಹುದು ಇಲ್ಲ ನಿಮಗಿಷ್ಟವಾದ ಕವಿಗಳು ಬರೆದ ಕವನದ ಸಾಲುಗಳಾಗಿರಬಹುದು....

ಸ್ವಹಸ್ತಾಕ್ಷರಗಳಲ್ಲಿ ಕನ್ನಡದಲ್ಲಿ ಬರೆದು ದಶಕಗಳೇ ಕಳೆದುಹೋಗಿವೆ..... ನನಗೆ ನೆನಪಿರೋಪ್ರಕಾರ ಬಿ ಎಸ್ಸಿ ಎರಡನೇ ವರ್ಷದ ಕನ್ನಡ ವಿಷಯದ ಪೇಪರ್ ಬರೆದದ್ದೇ ಕೊನೆ. ಆಮೇಲೆ ಆಗೋ ಈಗೋ ಅಲ್ಪ ಸ್ವಲ್ಪ ಡೈರೀನಲ್ಲಿ ಬರೆದದ್ದುಂಟು....... ಈ ಕಂಪ್ಯೂಟರ್ ಯುಗದಲ್ಲಿ, ಮುಂಚೆಯಂತೆ ಪತ್ರವ್ಯವಹಾರಗಳಿಲ್ಲ..... ದೊಡ್ಡದಾಗಿ ಕನ್ನಡ ಬ್ಲಾಗ್ ಬರೀತೀನಿ ಅಂತ ಹೇಳ್ಕೊಂಡ್ರು, ಅದು ಕೇವಲ ಕಂಪ್ಯೂಟರ್ ಕೀಬೋರ್ಡ್ ಕುಟ್ಟಿ ಬರೆಯೋದೇ ಹೊರತು ಕೈಬರಹ ಅಲ್ಲ...... ಅದಕ್ಕಾಗಿ ಈ ಚಾಲೆಂಜ್, ಬಹಳ ದಿನಗಳ ನಂತರ ಕೈಗೆ ಒಳ್ಳೆ ಕೆಲಸ ಕೊಡೋಹಂಗೆ ಇತ್ತು ಅನ್ನಬಹುದು ..... ಅಸಂಖ್ಯಾತ ಕನ್ನಡಿಗರು ವಿಶೇಷ ಕಾಳಜಿ ಮತ್ತು ಉತ್ಸಾಹದಿಂದ ಈ ಸವಾಲನ್ನು ಸ್ವೀಕರಿಸಿ ತಮ್ಮ ಕವನ ಬರೆಯೋ ಪ್ರತಿಭೆ ಹಾಗು ಕೈಬರಹ ತೋರಿಸಿದ್ದು ಇನ್ನು ವಿಶೇಷವಾಗಿತ್ತು.....

ನನಗು ಸ್ನೇಹಿತರೊಬ್ಬರು ಕೊಟ್ಟ ಈ ಸವಾಲನ್ನು ಸ್ವೀಕರಿಸೋ ಅವಕಾಶ...... ಡಿ. ವಿ. ಜಿ. ಅವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಲೇಖನಿಯಲ್ಲಿ ಹಾಳೆಯ ಮೇಲೆ ಮೂಡಿಸಿ ಆ ಫೋಟೋವನ್ನು ನನ್ನ FB ಗೋಡೆಯಮೇಲೆ ಹಂಚಿಕೊಂಡು ಸ್ನೇಹಬಳಗಕ್ಕೆ ಈ ಸವಾಲನ್ನು ಮುಂದುವರಿಸಿದೆ.....

ಯಾಕೋ ಗೊತ್ತಿಲ್ಲ ಈ ವಿಭಿನ್ನವಾದ ಚಾಲೆಂಜಿಗೆ ಇನ್ನಷ್ಟು ಮನ್ನಣೆ ಕೊಡಬೇಕನಿಸಿತು, ಅದಕ್ಕಾಗಿ ಮತ್ತೊಮ್ಮೆ ಈ ಚಾಲೆಂಜನ್ನು ಸಾರ್ವಜನಿಕವಾಗಿ ಸ್ವೀಕರಿಸಿ, ನನಗೆ ತುಂಬಾ ಇಷ್ಟವಾದ ಹಾಗು ಇತ್ತೀಚೆಗೆ ಅಂತ್ಯಂತ ಪ್ರಚಲಿತವಾದ , ಶ್ರೀ ಎಚ್. ಎಸ್. ವೆಂಕಟೇಶ್ ಮೂರ್ತಿ ಅವರು ಬರೆದ ......."ತೂಗುಮಂಚದಲ್ಲಿ ಕೂತು....".... ಎಂಬ, ಕೃಷ್ಣ-ರಾಧೇಯರ ಮಧ್ಯೆ ನಡೆಯುವ ಪ್ರಣಯ ಪ್ರಸಂಗವನ್ನು ರಸಭರಿತ ಸಾಹಿತ್ಯದೊಂದಿದೆ ಹೇಳುವ ಸುಂದರವಾದ ಕವನ, ಕಿರಿಕ್ ಪಾರ್ಟಿ ಎಂಬ ಸಿನಿಮಾದಲ್ಲಿ ಕೂಡ ಬಂದದ್ದು..... ಏಳೆಂಟು ಪ್ರಯತ್ನಗಳ ನಂತರ ಖಾಲಿ ಹಾಳೆಯಮೇಲೆ ಕೊನೆಗೂ ಬರೆದೆ....ಈ ಬ್ಲಾಗ್ ಲೇಖನದಲ್ಲಿ ಆ ನನ್ನ ಕೈಬರಹದ ಚಿತ್ರವನ್ನ ಹಂಚಿಕೊಳ್ತಾಯಿದ್ದೀನಿ..... 





ಈ ಸುಂದರವಾದ ಕವನವನ್ನು ಕೊಟ್ಟ ಶ್ರೀ ಎಚ್. ಎಸ್. ವೆಂಕಟೇಶ್ ಮೂರ್ತಿ ಅವರಿಗೆ ಧನ್ಯವಾದಗಳನ್ನ ಹೇಳಲೇಬೇಕು. ಆಮೇಲೆ, ಅದ್ಯಾರು ಮಹಾತ್ಮರು ಈ ಚಾಲೆಂಜನ್ನು ಶುರು ಮಾಡಿದ್ರೋ ಗೊತ್ತಿಲ್ಲ, ಆದರೆ ಅವರ ಈ ಕೆಲಸಕ್ಕೆ ತುಂಬಾ ತುಂಬಾ ಧನ್ಯವಾದಗಳು .....ಒಂದೇ ಬಗೆಯ ರೂಢಿಗಳ ಮಧ್ಯೆ ಹಿಂತಹ ವಿಭಿನ್ನ ಕ್ರಿಯೇಟಿವಿಟಿ ಅಥವಾ ಪ್ರಯತ್ನಗಳು ಅವಾಗವಾಗ ಆಗ್ತಾಇರಬೇಕು...... ಆಗಲೇ ಈ ಬದುಕು ಸುಂದರ ಅನಿಸುವುದು....... ಅಲ್ಲ್ವ  ಮತ್ತೆ!!