ಗುರುವಾರ, ಜನವರಿ 3, 2019

84ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗು ಕಂಬಾರರ ಮೂಡಲ ಮನೆಯ ಹಾಡು.....

ನಮ್ಮ ಕರ್ನಾಟಕ ರಾಜ್ಯದ ಶಿಕ್ಷಣ ಕಾಶಿ ಎಂದೇ ಹೆಸರುವಾಸಿ ಆಗಿರುವ ಪೆಡನಾಗರಿ, ಧಾರವಾಡದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಕನ್ನಡ ನುಡಿ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಈ ಸಮಯದಲ್ಲಿ ಸದರಿ ೮೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ Dr. ಚಂದ್ರಶೇಖರ ಕಂಬಾರ ಅವರು ರಚಿಸಿರುವ ಪ್ರಸಿದ್ಧ ಮೂಡಲ ಮನೆ ಧಾರಾವಾಹಿಯ ಎಂದೂ ಮರೆಯದ ಶೀರ್ಷಿಕೆ ಹಾಡಿನ ಆ ಸುಂದರ ಜಾನಪದ ಶೈಲಿಯ ಸಾಲುಗಳ ನೆನಪು ಮರುಕಳಿಸಿತು….

ನಮ್ಮೂರ ಅಗಸ್ಯಾಗ ಆಲದ ಮರ ಬೆಳೆದು
ಹಾದಿ ಬೀದೆಲ್ಲ ತಂಪ ನೆರಳ….

ರೆಂಬೆ ಕೊಂಬೆ ಮ್ಯಾಲ ಗೂಡ ಕಟ್ಟಿದಾವ
ರೆಕ್ಕಿ ಬಲಿತ ಹಕ್ಕಿ... ಗೂಡಿನ್ಯಾಗ ಮಲಿಗ್ಯಾವ ಮರಿ ಹಕ್ಕಿ
ದೂರ ದೇಶದ ವಲಸಿಗ ಹಕ್ಕಿಗೂ ಐತ್ರಿ ಜಾಗ ಒಳಗ...
ಬನ್ನಿರಿ ನೀವು ನಮ್ಮ ಬಳಗ.
ಹಳೆಯ ಬಾವಿಯ ತಳದ ನೀರಿನ್ಯಾಗ
ಹಸಿರು ಚಿಗುರತಾವ... ಬೇರಿನ ಮೊಳಕೆ ಒಡಿಯತಾವ
ಬೂತ ಬೇತಾಳ.... ಜೋತ ಬಾವಲಿ ಮ್ಯಾಲ ತೂಗತಾವ
ಮರದಾಗ ಕರಗ ಕುಣಿಯತಾವ.
ಮರದ ಎಲಿ ನೆರಳು ಮನೆಯ ಗ್ವಾಡಿಮ್ಯಾಲ ಆಡತಾವ ಆಟ
ಮೂಡ್ಯಾವ ತೊಗಲ ಗೊಂಬಿ ಆಟ
ಕರುಳ ಬಳ್ಳಿಯ ಕಥೆಯ ಹೇಳತಾವ
ನೋಡ್ರಿ ಶಾಂತ ಚಿತ್ತ.... ನಾವು ನೀವು ಅದರ ಭಾಗ ಮಾತ್ರ..... 
ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡಿನಲ್ಲಿ ಮಗದೊಮ್ಮೆ ನಡೆಯುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಮತ್ತು ನಮ್ಮ ನಾಡು, ನುಡಿ, ನೆಲ, ಜಲ, ಹಾಗು ನಮ್ಮ ಪರಂಪರೆಯ ಪರಿಚಯ ಎಲ್ಲೆಡೆ ಹಬ್ಬಲಿ ಎಂದು ಹಾರೈಸೋಣ…..
।। ಸಿರಿಗನ್ನಡಂ ಗೆಲ್ಗೆ ।।