ಜಾನಪದ ಸಾಹಿತ್ಯ ಅನ್ನೋದು ಒಂದು ವಿಶಾಲವಾದ ಸಾಗರ. ನಮ್ಮ ಗ್ರಾಮೀಣ ಸೊಗಡುಗಳಲ್ಲಿ ಒಂದಾದ ಜಾನಪದ ಹಾಡುಗಳು, ಹಳ್ಳಿಯ ಜೀವನದ ಶೈಲಿ ಮತ್ತು ಸಂಸ್ಕೃತಿಯ ಪ್ರತೀಕ. ದುರಾದೃಷ್ಟವಷಾತ್ತ್ ಈ ಜಾನಪದ ಹಾಡುಗಳು ಯಾವುದೇ ಲಿಪಿ ಅಥವಾ ಗ್ರಂಥಗಳ ರೂಪಲ್ಲಿ ಇಲ್ಲದೆ, ಕೇವಲ ಗ್ರಾಮೀಣ ಹೆಣ್ಣುಮಕ್ಕಳ ಬಾಯಲ್ಲಿ ಹಾಡುಗಳ ರೂಪದಲ್ಲಿ ತಲತಲಾಂತರಗಳಿಂದ ಉಳಿದುಕೊಂಡು ಬಂದಿವೆ. ಇತ್ತಿತ್ತಲಾಗಿ ಬಹಳ ಜನ ಕವಿ/ಲೇಖಕರು ಜಾನಪದ ಸಾಹಿತ್ಯವನ್ನು ಗ್ರಂಥಗಳ ರೂಪದಲ್ಲಿ ಉಳಿಸೋ ಪ್ರಯತ್ತ್ನ ಮಾಡಿದ್ದುಂಟು.
ಕೆಲವು ದಿನಗಳ ಹಿಂದೆ ಯಾವುದೇ TV ಚಾನಲ್ಲಿನಲ್ಲಿ, "ಟೋನಿ" ಎಂಬ ಸಿನೆಮಾ ಬರುತಿತ್ತು. ಜಯತೀರ್ಥ ಎಂಬವರ ನಿರ್ದೇಶನದಲ್ಲಿ, ಶ್ರೀನಗರ ಕಿಟ್ಟಿ ಹಾಗು ಅಂದ್ರಿತಾ ರೈ ಮುಖ್ಯಪಾತ್ರಾಭಿನಯದ, ಒಂದು ರೋಮಾಂಚಕ ಪತ್ತೇದಾರಿ ಕಥೆ ಹಿನ್ನೆಲೆಯ ಸಿನೆಮಾ. ನಿರ್ದೇಶಕ ಈ ಚಿತ್ರದಲ್ಲಿ ಮೂರು ಕಥೆಗಳನ್ನು ಒಟ್ಟಿಗೆ ಹೆಣೆಯುತ್ತಾ ಹೋಗುತ್ತಾನೆ. ಮುಖ್ಯ ಕಥೆ ಬಂದು, ಸ್ವಲ್ಪ ಸಮಯದಲ್ಲಿಯೇ ಜಾಸ್ತಿ ದುಡ್ಡುಮಾಡೋ ಕನಸು ಕಾಣುತ್ತೀರೋ ಒಬ್ಬ ಯುವಕ, ದುಡ್ಡಿಗಾಗಿ ಏನೇ ಕೆಲಸ ಕೊಟ್ಟರು ಮಾಡಲು ಸಿದ್ಧವಿದ್ದು, ಒಂದು ಕ್ರಿಮಿನಲ್ಗಳ ಗುಂಪಿನ ಜಾಲಕ್ಕೆ ಸಿಲುಕಿ ಒದ್ದಾಡೊ ಕಥೆ. ಇದರ ಜೊತೆಗೆ, ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಡೆಯುವ ಇನ್ನೆರಡು ಉಪಕಥೆಗಳು. ಆ ಎರಡು ಉಪಕಥೆಗಳಲ್ಲಿ, ಒಂದು ಉಪಕಥೆಯನ್ನು ತುಂಬಾ ಚೆನ್ನಾಗಿ, ಗ್ರಾಮೀಣ ಸೊಗಡಿನಲ್ಲಿ, ಎಲ್ಲೋ ಅಡಗಿ ಕುಂತಿದ್ದ ಚತುಷ್ಪದಿಯಲ್ಲಿರುವ ಮೂರು ಜಾನಪದ ಗೀತೆಗಳ ಸಹಾಯದೊಂದಿಗೆ ವರ್ಣಿಸುತ್ತ ಹೋಗೋ ರೀತಿ ಅತೀ ಶ್ಲಾಘನೀಯ.
ನನಗೆ ಇಂತಹ ವಿಶಿಷ್ಟವಾದ ಜಾನಪದ ಗೀತೆಗಳು, ಚಲನಚಿತ್ರ ಅಥವಾ ಭಾವಗೀತೆಗಳ ಮನಸಿಗ್ಗೆ ಮುದನೀಡುವ ಒಳ್ಳೆಯ ಸಾಲುಗಳು ಹಾಗು ಶಾಯರಿಗಳನ್ನೂ ಸಂಗ್ರಹಿಸುವ ಹವ್ಯಾಸ. ಅದೇ ರೀತಿ ಈ ಟೋನಿ ಚಿತ್ರದ ಮೂರು ಸೊಗಸಾದ, ಜಾನಪದ ಗೀತೆಗಳನ್ನು ಸಂಗ್ರಹಿಸಿಟ್ಟಿದ್ದೆ. ಈ ನನ್ನ ಪೋಸ್ಟಿನಲ್ಲಿ ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋ ಪ್ರಯತ್ನ.......
ಮೇಲೆ ಹೇಳಿದ ಎರಡನೆ ಉಪಕಥೆಯಲ್ಲಿ ಊರೂರು ತಿರುಗುವ ಒಬ್ಬ ಜ್ಯೋಗಿ ತನ್ನ ಹೆಂಡತಿಯೊಡನೆ ಜಾನಪದ ಹಾಡುಗಳನ್ನು ಹಾಡುತ್ತ ಒಂದು ಹಳ್ಳಿಗೆ ಬರುತ್ತಾನೆ.....ಅವನ ಹಾಡಿಗೆ ಮರುಳಾಗಿ ಹಳ್ಳಿಯ ಒಬ್ಬ ಜಮೀನುದಾರ ಆ ಜ್ಯೋಗಿ ಮತ್ತು ಅವನ ಹೆಂಡಿತಿಯನ್ನು ಮನೆಗೆ ಸ್ವಾಗತಿಸಿ ...ಜ್ಯೋಗಿಯ ಬಾಯಲ್ಲಿ ಈ ಕೆಳಗಿನ ಗೀತೆಗಳನ್ನು ಹಾಡಿಸುತ್ತಾನೆ.
ಮೊದಲನೇ ಗೀತೆ......
ಎಂಟೆಲೆ ಮಾವಿನ ದಂಟಲ್ಲಿ ಇರುವೊಳೆ
ಗಂಟೆಯ ಗತಿಗೆ ನಲಿಯೊಳೆ
ಗಂಟೆಯ ಗತಿಗೆ ನಲಿಯೊಳೆ।। ಸರಸತಿಯೆ
ಗಂಟಲ ತೋಡರ ಬಿಡಿಸವ್ವ.
ಕಲ್ಲುಮುಳ್ಳಿದ್ದರೆ ಹುಲ್ಲಂತೆ ತಿಳಿದೆವು
ಸೊಲ್ಲೆರಿಸಿ ಹಾಡಿ ನಲಿದೆವು
ಸೊಲ್ಲೆರಿಸಿ ಹಾಡಿ ನಲಿದೆವು।। ಭಗವಂತ
ಸುಳ್ಳಾಡುವ ದಾರಿ ಬಿಡಿಸಯ್ಯ.
ಬಳಗವು ಹೆಚ್ಚಲಿ ಬಂಧನ ದಗ್ಗಲಿ
ಕೊಳಗದಿ ಹೊನ್ನ ಅಳೆಯಲಿ
ಕೊಳಗದಿ ಹೊನ್ನ ಅಳೆಯಲಿ।। ಮನವಂತ
ನಡುಮನೆ ಜ್ಯೋತಿ ಉರಿಯಲಿ.
ಎರಡನೇ ಗೀತೆ......
ಶಿವ ಶಿವ ಎಂದರೆ ಸಿಡಿಲೆಲ್ಲ ಬಯಲಾಗಿ
ಕಲ್ಲು ಬಂದೆರಗಿ ಕಡೆಗಾಗಿ
ಕಲ್ಲು ಬಂದೆರಗಿ ಕಡೆಗಾಗಿ।।ಎಲೆ ಮನವೇ
ಶಿವನೆಂಬ ಸವುದಾ ಬಿಡಬ್ಯಾಡ.
ಬೀಸುವ ಪದ ಚಂದ ಕೂಸಿನ ಧನಿ ಚಂದ,
ನವಿಲಾಡೋ ನಮ್ಮ ವನ ಚಂದ
ನವಿಲಾಡೋ ನಮ್ಮ ವನ ಚಂದ|| ಸೊಸೆ ಮುದ್ದ
ಮಲ್ಲಿಗೆ ಗಂಧ ಬಲು ಚಂದ.
ಮಳೆರಾಯ ಉಯ್ಯಲಿ, ಕೆರೆರಾಯ ತುಂಬಲಿ,
ಹನ್ನೆರಡು ಕೊಡಿ ಹರಿಯಲಿ
ಹನ್ನೆರಡು ಕೊಡಿ ಹರಿಯಲಿ|| ನಮ್ಮೂರ
ಸಣ್ಣಕಿ ವಯಲು ಬೆಳೆಯಲಿ.
ಮೂರನೇ ಗೀತೆ.......
ಕಾಸಿಗೆ ಹೋಗಾಕೆ ಏಸೊಂದು ದಿನಬೆಕು
ತಾಸೊತ್ತಿನ ಹಾದಿ ತವರೂರು
ತಾಸೊತ್ತಿನ ಹಾದಿ ತವರೂರು।। ಮನೆಯಾಗೆ
ಕಾದು ಕುಂತಾಳೆ ಹಡೆದವ್ವ, ಜಗಕೆಲ್ಲ ಇವಳೇ ಪರಧೈವ.
ಸೊಸೆಯು ಗಂಡಹಡೆಯಲಿ ಮಗಳು ಹೆಣ್ಣಹಡೆಯಲಿ
ಎಳೆಗರು ಎಮ್ಮೆ ಕರೆಯಲಿ
ಎಳೆಗರು ಎಮ್ಮೆ ಕರೆಯಲಿ।। ಈ ಮನೆಯ
ಸಡಗರ ನೋಡೋಕೆ ಶಿವ ಬರಲಿ.
ಲೋಕದಾಗಿರುತನಕ ಬೇಕಾಗಿ ಇರಬೇಕು
ಸಾಕಾಗಿ ಶಿವನ ಸದರಿಗೆ
ಸಾಕಾಗಿ ಶಿವನ ಸದರಿಗೆ ಹೋಗಾಗ।।
ಎಲ್ಲಾರು ಬರುತ್ತಾರೆ ಕಳಿಸಾಕೆ.
ನಾನು ಎಷ್ಟೋ ಜಾನಪದ ಗೀತೆಗಳನ್ನು ಓದಿದ್ದಿನಿ/ಕೇಳಿದ್ದೀನಿ, ಆದರೆ ಈ ಮುರು ಗೀತೆಗಳು ಯಾಕೋ ಎಲ್ಲೂ ಕೇಳಿರದ ಹೊಚ್ಚ ಹೊಸ ಪರಿಚಯ ಅನಿಸಿತು. ಸಾಧ್ಯವಾದರೆ ಟೋನಿ ಚಿತ್ರ ನೋಡಿ, ಸಂಧರ್ಭಕ್ಕೆ ತಕ್ಕಂತೆ ನಿರ್ದೇಶಕ ಈ ಗೀತೆಗಳನ್ನು ಕಥೆಯೊಂದಿಗೆ ಹೆಣೆದಿರುವ ರೀತಿ ನಿಮಗೆ ನಿಜವಾಗ್ಲೂ ಇಷ್ಟವಾಗತ್ತೆ. ನನಗೆ ಮಾತ್ರ ಈ ಕಳಸ ಬಹಳ ಇಷ್ಟವಾಯಿತು. ಯಾಕೆಂದ್ರೆ ನಶಿಸಿ ಹೋಗುತ್ತಿರುವ ಇಂಥ ಎಷ್ಟೋ ಕಾವ್ಯ ಸಂಪತ್ತನ್ನು ಉಳಿಸುವ ಪ್ರಯತ್ನವಾಗಬೇಕಾಗಿದೆ . ಇಲ್ಲಿ ನಿರ್ದೇಶಕ ಆ ಕೆಲಸ ಮಾಡಿದ್ದಾನೆ ಎನ್ನಿಸಿತು. ಹೇಮಂತ ಮತ್ತು ಪಲ್ಲವಿ ಯವರ ಧ್ವನಿಯಲ್ಲಿ, ಸಾಧುಕೋಲ ಅವರ ಸಂಗೀತ ನಿರ್ದೇಶನದಲ್ಲಿ ಈ ಗೀತೆಗಳು, ಕೇಳಲು ಇಂಪಾದ ಸಂಗೀತದೊಂದಿದೆ ಮೂಡಿ ಬಂದಿವೆ.
ಕೆಲವು ದಿನಗಳ ಹಿಂದೆ ಯಾವುದೇ TV ಚಾನಲ್ಲಿನಲ್ಲಿ, "ಟೋನಿ" ಎಂಬ ಸಿನೆಮಾ ಬರುತಿತ್ತು. ಜಯತೀರ್ಥ ಎಂಬವರ ನಿರ್ದೇಶನದಲ್ಲಿ, ಶ್ರೀನಗರ ಕಿಟ್ಟಿ ಹಾಗು ಅಂದ್ರಿತಾ ರೈ ಮುಖ್ಯಪಾತ್ರಾಭಿನಯದ, ಒಂದು ರೋಮಾಂಚಕ ಪತ್ತೇದಾರಿ ಕಥೆ ಹಿನ್ನೆಲೆಯ ಸಿನೆಮಾ. ನಿರ್ದೇಶಕ ಈ ಚಿತ್ರದಲ್ಲಿ ಮೂರು ಕಥೆಗಳನ್ನು ಒಟ್ಟಿಗೆ ಹೆಣೆಯುತ್ತಾ ಹೋಗುತ್ತಾನೆ. ಮುಖ್ಯ ಕಥೆ ಬಂದು, ಸ್ವಲ್ಪ ಸಮಯದಲ್ಲಿಯೇ ಜಾಸ್ತಿ ದುಡ್ಡುಮಾಡೋ ಕನಸು ಕಾಣುತ್ತೀರೋ ಒಬ್ಬ ಯುವಕ, ದುಡ್ಡಿಗಾಗಿ ಏನೇ ಕೆಲಸ ಕೊಟ್ಟರು ಮಾಡಲು ಸಿದ್ಧವಿದ್ದು, ಒಂದು ಕ್ರಿಮಿನಲ್ಗಳ ಗುಂಪಿನ ಜಾಲಕ್ಕೆ ಸಿಲುಕಿ ಒದ್ದಾಡೊ ಕಥೆ. ಇದರ ಜೊತೆಗೆ, ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಡೆಯುವ ಇನ್ನೆರಡು ಉಪಕಥೆಗಳು. ಆ ಎರಡು ಉಪಕಥೆಗಳಲ್ಲಿ, ಒಂದು ಉಪಕಥೆಯನ್ನು ತುಂಬಾ ಚೆನ್ನಾಗಿ, ಗ್ರಾಮೀಣ ಸೊಗಡಿನಲ್ಲಿ, ಎಲ್ಲೋ ಅಡಗಿ ಕುಂತಿದ್ದ ಚತುಷ್ಪದಿಯಲ್ಲಿರುವ ಮೂರು ಜಾನಪದ ಗೀತೆಗಳ ಸಹಾಯದೊಂದಿಗೆ ವರ್ಣಿಸುತ್ತ ಹೋಗೋ ರೀತಿ ಅತೀ ಶ್ಲಾಘನೀಯ.
ನನಗೆ ಇಂತಹ ವಿಶಿಷ್ಟವಾದ ಜಾನಪದ ಗೀತೆಗಳು, ಚಲನಚಿತ್ರ ಅಥವಾ ಭಾವಗೀತೆಗಳ ಮನಸಿಗ್ಗೆ ಮುದನೀಡುವ ಒಳ್ಳೆಯ ಸಾಲುಗಳು ಹಾಗು ಶಾಯರಿಗಳನ್ನೂ ಸಂಗ್ರಹಿಸುವ ಹವ್ಯಾಸ. ಅದೇ ರೀತಿ ಈ ಟೋನಿ ಚಿತ್ರದ ಮೂರು ಸೊಗಸಾದ, ಜಾನಪದ ಗೀತೆಗಳನ್ನು ಸಂಗ್ರಹಿಸಿಟ್ಟಿದ್ದೆ. ಈ ನನ್ನ ಪೋಸ್ಟಿನಲ್ಲಿ ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋ ಪ್ರಯತ್ನ.......
ಮೇಲೆ ಹೇಳಿದ ಎರಡನೆ ಉಪಕಥೆಯಲ್ಲಿ ಊರೂರು ತಿರುಗುವ ಒಬ್ಬ ಜ್ಯೋಗಿ ತನ್ನ ಹೆಂಡತಿಯೊಡನೆ ಜಾನಪದ ಹಾಡುಗಳನ್ನು ಹಾಡುತ್ತ ಒಂದು ಹಳ್ಳಿಗೆ ಬರುತ್ತಾನೆ.....ಅವನ ಹಾಡಿಗೆ ಮರುಳಾಗಿ ಹಳ್ಳಿಯ ಒಬ್ಬ ಜಮೀನುದಾರ ಆ ಜ್ಯೋಗಿ ಮತ್ತು ಅವನ ಹೆಂಡಿತಿಯನ್ನು ಮನೆಗೆ ಸ್ವಾಗತಿಸಿ ...ಜ್ಯೋಗಿಯ ಬಾಯಲ್ಲಿ ಈ ಕೆಳಗಿನ ಗೀತೆಗಳನ್ನು ಹಾಡಿಸುತ್ತಾನೆ.
ಮೊದಲನೇ ಗೀತೆ......
ಎಂಟೆಲೆ ಮಾವಿನ ದಂಟಲ್ಲಿ ಇರುವೊಳೆ
ಗಂಟೆಯ ಗತಿಗೆ ನಲಿಯೊಳೆ
ಗಂಟೆಯ ಗತಿಗೆ ನಲಿಯೊಳೆ।। ಸರಸತಿಯೆ
ಗಂಟಲ ತೋಡರ ಬಿಡಿಸವ್ವ.
ಕಲ್ಲುಮುಳ್ಳಿದ್ದರೆ ಹುಲ್ಲಂತೆ ತಿಳಿದೆವು
ಸೊಲ್ಲೆರಿಸಿ ಹಾಡಿ ನಲಿದೆವು
ಸೊಲ್ಲೆರಿಸಿ ಹಾಡಿ ನಲಿದೆವು।। ಭಗವಂತ
ಸುಳ್ಳಾಡುವ ದಾರಿ ಬಿಡಿಸಯ್ಯ.
ಬಳಗವು ಹೆಚ್ಚಲಿ ಬಂಧನ ದಗ್ಗಲಿ
ಕೊಳಗದಿ ಹೊನ್ನ ಅಳೆಯಲಿ
ಕೊಳಗದಿ ಹೊನ್ನ ಅಳೆಯಲಿ।। ಮನವಂತ
ನಡುಮನೆ ಜ್ಯೋತಿ ಉರಿಯಲಿ.
ಎರಡನೇ ಗೀತೆ......
ಶಿವ ಶಿವ ಎಂದರೆ ಸಿಡಿಲೆಲ್ಲ ಬಯಲಾಗಿ
ಕಲ್ಲು ಬಂದೆರಗಿ ಕಡೆಗಾಗಿ
ಕಲ್ಲು ಬಂದೆರಗಿ ಕಡೆಗಾಗಿ।।ಎಲೆ ಮನವೇ
ಶಿವನೆಂಬ ಸವುದಾ ಬಿಡಬ್ಯಾಡ.
ಬೀಸುವ ಪದ ಚಂದ ಕೂಸಿನ ಧನಿ ಚಂದ,
ನವಿಲಾಡೋ ನಮ್ಮ ವನ ಚಂದ
ನವಿಲಾಡೋ ನಮ್ಮ ವನ ಚಂದ|| ಸೊಸೆ ಮುದ್ದ
ಮಲ್ಲಿಗೆ ಗಂಧ ಬಲು ಚಂದ.
ಮಳೆರಾಯ ಉಯ್ಯಲಿ, ಕೆರೆರಾಯ ತುಂಬಲಿ,
ಹನ್ನೆರಡು ಕೊಡಿ ಹರಿಯಲಿ
ಹನ್ನೆರಡು ಕೊಡಿ ಹರಿಯಲಿ|| ನಮ್ಮೂರ
ಸಣ್ಣಕಿ ವಯಲು ಬೆಳೆಯಲಿ.
ಮೂರನೇ ಗೀತೆ.......
ಕಾಸಿಗೆ ಹೋಗಾಕೆ ಏಸೊಂದು ದಿನಬೆಕು
ತಾಸೊತ್ತಿನ ಹಾದಿ ತವರೂರು
ತಾಸೊತ್ತಿನ ಹಾದಿ ತವರೂರು।। ಮನೆಯಾಗೆ
ಕಾದು ಕುಂತಾಳೆ ಹಡೆದವ್ವ, ಜಗಕೆಲ್ಲ ಇವಳೇ ಪರಧೈವ.
ಸೊಸೆಯು ಗಂಡಹಡೆಯಲಿ ಮಗಳು ಹೆಣ್ಣಹಡೆಯಲಿ
ಎಳೆಗರು ಎಮ್ಮೆ ಕರೆಯಲಿ
ಎಳೆಗರು ಎಮ್ಮೆ ಕರೆಯಲಿ।। ಈ ಮನೆಯ
ಸಡಗರ ನೋಡೋಕೆ ಶಿವ ಬರಲಿ.
ಲೋಕದಾಗಿರುತನಕ ಬೇಕಾಗಿ ಇರಬೇಕು
ಸಾಕಾಗಿ ಶಿವನ ಸದರಿಗೆ
ಸಾಕಾಗಿ ಶಿವನ ಸದರಿಗೆ ಹೋಗಾಗ।।
ಎಲ್ಲಾರು ಬರುತ್ತಾರೆ ಕಳಿಸಾಕೆ.
ನಾನು ಎಷ್ಟೋ ಜಾನಪದ ಗೀತೆಗಳನ್ನು ಓದಿದ್ದಿನಿ/ಕೇಳಿದ್ದೀನಿ, ಆದರೆ ಈ ಮುರು ಗೀತೆಗಳು ಯಾಕೋ ಎಲ್ಲೂ ಕೇಳಿರದ ಹೊಚ್ಚ ಹೊಸ ಪರಿಚಯ ಅನಿಸಿತು. ಸಾಧ್ಯವಾದರೆ ಟೋನಿ ಚಿತ್ರ ನೋಡಿ, ಸಂಧರ್ಭಕ್ಕೆ ತಕ್ಕಂತೆ ನಿರ್ದೇಶಕ ಈ ಗೀತೆಗಳನ್ನು ಕಥೆಯೊಂದಿಗೆ ಹೆಣೆದಿರುವ ರೀತಿ ನಿಮಗೆ ನಿಜವಾಗ್ಲೂ ಇಷ್ಟವಾಗತ್ತೆ. ನನಗೆ ಮಾತ್ರ ಈ ಕಳಸ ಬಹಳ ಇಷ್ಟವಾಯಿತು. ಯಾಕೆಂದ್ರೆ ನಶಿಸಿ ಹೋಗುತ್ತಿರುವ ಇಂಥ ಎಷ್ಟೋ ಕಾವ್ಯ ಸಂಪತ್ತನ್ನು ಉಳಿಸುವ ಪ್ರಯತ್ನವಾಗಬೇಕಾಗಿದೆ . ಇಲ್ಲಿ ನಿರ್ದೇಶಕ ಆ ಕೆಲಸ ಮಾಡಿದ್ದಾನೆ ಎನ್ನಿಸಿತು. ಹೇಮಂತ ಮತ್ತು ಪಲ್ಲವಿ ಯವರ ಧ್ವನಿಯಲ್ಲಿ, ಸಾಧುಕೋಲ ಅವರ ಸಂಗೀತ ನಿರ್ದೇಶನದಲ್ಲಿ ಈ ಗೀತೆಗಳು, ಕೇಳಲು ಇಂಪಾದ ಸಂಗೀತದೊಂದಿದೆ ಮೂಡಿ ಬಂದಿವೆ.